ಮಡಲಿನ ಮಡಿಲು

ಹೆಚ್ಚಿಗೇನು ಬಯಸಿರಲಿಲ್ಲ
ಆ ಜನ
ಅಂಬಲಿಗೆ ಅನ್ನ ಬೆರೆಸಿ
ಕುದಿಸಿಟ್ಟು ಕುಡಿದರೆ
ಅಷ್ಟೇ ಸಾಕು ಅಮೃತದ ಪಾನ

ಒಡೆಯನ ಗದ್ದೆಗೆ
ಒಂದಿಷ್ಟು ಗೊಬ್ಬರ
ಎರೆದರೆ ಸಾಕು
ಆದಿನ ಎಸೆದ
ಎರಡಾಣೆಗೆ ತೃಪ್ತ ಮನ

ಹೊತ್ತು ಮರೆ ಸರಿಯೇ
ತಿಂಗಳಿಣುಕುತ್ತಿರೆ
ಒಂದಷ್ಟು ಬಿಸಿ ಬಿಸಿ ನೀರು
ಎಣ್ಣೆ ತಿಕ್ಕಿ ಹೊಯ್ದರೆ ಸಾಕು
ಮೈದಣಿವಿಗೆ ಅಭ್ಯಂಗ ಸ್ನಾನ

ಇರುಳುಗುತ್ತಲೆಯಲ್ಲಿ
ಚಿಮಣಿ ಬುಡ್ಡಿಯ ಹಚ್ಚಿ
ಒಂದೆರಡು ಜಪ ಭಜನೆ ಸಾಕು
ವಿಠಲನ ಸಾರ್ಥಕ ಆ ದಿನ

ಕುಚಲಕ್ಕಿ ಅನ್ನ
ಬಡವರ ಬಂಧು
ಭೂ ತಾಯಿ ಮೀನ ಪಳದಿಯ
ಸವಿದರೆ ಸಾಕು
ಮೃಷ್ಟಾನ್ನ ಭೋಜನ
ಮಡಲಿನ ಹಂದರದಿ
ಸಗಣಿ ಸಾರಿಸಿದ ತಾವಿಗೊರಗಿ
ಕಂಬಳಿ ಹೊದ್ದು
ಮೈಮರೆತು ಕಣ್ಣ ಮುಚ್ಚಿದರೆ ಸಾಕು
(ಫ್ಯಾನು ಎರ್‍ ಕಂಡಿಷನ್
ತೆಗೆದು ಒಲೆಯೊಳಗೆ ಹಾಕು)
ನಿದ್ರಾದೇವಿಯ ಹಿತವಾದ
ಆಲಿಂಗನ

ಆಹಾ ಎಂಥ ಬದುಕು ಕಣಾ
ಹಳಹಳಿಸಿ ಬಯಸಿದರೂ
ಸಿಕ್ಕದು ಇಂದಿಗದು ಕನಸು ಕಣಾ


Previous post ಪದ್ಯವಾಗಲಿಲ್ಲ
Next post ಬಸವನ ಹುಳ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys